Thursday, September 4, 2008

ಮತ್ತೆ ನಿನ್ನದೇ ನೆನಪು

ಮತ್ತೆ ನಿನ್ನದೇ ನೆನಪು, ನಿನ್ನ ಕಣ್ಣಿನಲ್ಲಿ ಸಣ್ಣ ತೆರೆ ನೀರು, ತುಟಿಗಳ ಕಂಪನ, ಮಾತುಗಳಲ್ಲಿ ಮಮತೆ ಕಂಡು ಆಗಾಗ ಕೊರಳ ಸೆರೆ ಉಬ್ಬಿ ಬಂದು ನೀನು ಅನುಭವಿಸಿದ ಯಾತನೆ, ಸಂಕಟ... ನಿನ್ನದು ದುಃಖ ಪಡುವ ಮನಸಲ್ಲ ಗೆಳತಿ, ಹಕ್ಕಿ ಗಾತ್ರದ ಆ ನಿನ್ನ ಜೀವಕ್ಕೆ ತಿಳಿ ರಾತ್ರಿಯಲ್ಲಿ ಚಂದ್ರನ ಜೊತೆ ಮಾತನಾಡಿ ನಿನ್ನ ದುಃಖ ಇಳಿಸುವುದು ಹೇಗೆ? ಕವಳದ ಹಂಬಲದಲ್ಲಿ ನೀನು 'ಗುಂಪು ಕಳೆದುಕೊಂಡ ಒಂಟಿ ಹಕ್ಕಿ'! ಅದು ಹಾಡಿ ಹಾಡಿ ಸಾಯುವ ಹೊತ್ತು.
ಅಂದದಂತಹ ಚಂದ್ರನೊಂದಿಗೆ ದೊಡ್ಡ ಕನಸಿನ ಮೂಟೆ ಹೊತ್ತು ಬೇಸರದ ದೀಣೆಗೆ ನಿದ್ರೆ ಬಾರದ ಹೊತ್ತು! ಈ ಜಗತ್ತು ಮನಸ್ಸಾರೆ ನಗಲು ಬಿಡುವುದಿಲ್ಲ, ಕಣ್ಣು ದಿಮ್ಮಿಕ್ಕಿ ಎದೆ ಬಿರಿದು ಅಳಲೂ ಬಿಡುವುದಿಲ್ಲ. ನಾನು ನಿನ್ನ ದುಃಖಗಳನ್ನು ನೆನಪಿಸುತಿಲ್ಲ, ಅವುಗಳನ್ನು ಮರೆಯಲು ಬಿದುತಿದ್ದೇನೆ...
ನಿನ್ನ ನಗೆ ನೀನೇ ಇಟ್ಟುಕೋ, ಹಾಗಂತ ನಾನು ನಿನ್ನ ನಗುವನ್ನು ಕಿತ್ತುಕೊಂಡೆ ಅಂತ ಮಾತ್ರ ಹೇಳಬೇಡ.
ಆ ನಿನ್ನ ನಗುವನ್ನು ನೀನೇ ಇಟ್ಟುಕೋ, ನಿನ್ನ ನಿಟ್ಟುಸಿರಿನಲ್ಲಿ ನನಗಿಟ್ಟಿದ್ದ ಪಾಲು ಕೊಡು. ನಮಗೆ ದುಃಖವೊಂದೆ ಉಳಿದಿಲ್ಲ, ನಾವು ಎಷ್ಟೇ ಸಾಮನ್ಯರಾದರೂ ಅಸಾಮಾನ್ಯ ಸಂತೋಷಗಳನ್ನು ಅನುಭವಿಸಲು ಅರ್ಹರಾಗಿರುತ್ತೇವೆ. ಕಡುಬಡವನ ಮನೆಯಲ್ಲಿ ಹಬ್ಬ ನಡೆದ ಹಾಗೆ... ಅದು ಪುಟ್ಟ ಸಂತೋಷವೇ ಇರಬಹುದು ದೊಡ್ಡ ನೋವನ್ನು ಮರೆಸಲಿಕ್ಕೆ ಅಷ್ಟು ಸಾಕು.
ಪ್ರತಿ ದಿನ ಇದೇ ನೆನಪುಗಳು ನನ್ನನ್ನು ಕಾಡಿ ಮನೆಯಿಂದ ಮರಳಿ ಹೊರಗೆ ಬಂದು ನಿನ್ನನ್ನು ಹುಡುಕದ ಜಾಗವಿಲ್ಲ, ತಡಕದ ತಾಣವಿಲ್ಲ, ನಾನಿಲ್ಲಿ ಕುಳಿತು ನಿನ್ನ ಭಜನೆ ಮಾಡುತ್ತಿರುವಾಗ ನೀನೇನು ಮಾಡುತ್ತಿರುವೆ. ನನ್ನ ಹೆಸರಿನಲ್ಲಿ ಪೂಜೆ ಮಾಡಿಸಿದವಳು, ಮನಸಿನಲ್ಲಿಟ್ಟೂ ಪೂಜಿಸಿದವಳು, ದೇವರ ಪ್ರತಿರೂಪವಂತೆ ತಿಳಿದು ನನ್ನ ಮಗುವಾಗಿಸಿದವಳು. ನನ್ನ ಕಂಬನಿಗಳನ್ನು ಬೊಗಸೆಯಲ್ಲಿ ಹಿಡಿದವಳು. ನನ್ನ ಸಿಡಿಮಿಡಿಗೆ ಮಗುವಂತೆ ಅತ್ತವಳು. ನನ್ನ ಗುಲಾಬಿ ಮುಡಿದವಳು. ನಾನು ನಾನಗಿದ್ದೆ! ಪ್ರಪಂಚದ ಸಂಭಂದನೆ ಇರದಂತೆ ಇದ್ದೆ ಆಗಲೇ ನಿನ್ನ ಪ್ರೀತಿ ಜೊತೆಯಾದದ್ದು, ನೀನಾಗಿ ನನ್ನನ್ನು ನಿನ್ನ ಚೆಂದದ ಗೆಳೆಯ ಅಂದುಕೊಂಡದ್ದು, ಆದರೆ ನಿನ್ನ ನೋಡಿದ ದಿನವೇ ನಿನ್ನನ್ನು ಪ್ರೀತಿಸಿಬಿಟ್ಟೆ, ಇದು ನಿನಗೆ ಇಷ್ಟವಾಗದಿದ್ದರು ನಾನು ನಿನಗೆ ಇಷ್ಟವಾದೆ. ಪ್ರೀತಿ ನಮ್ಮಿಬ್ಬರನ್ನು ಬಂದಿಸಿತು. ಆಗ ನೀನು ಎಷ್ಟು ಚೆನ್ನಗಿದ್ದಿ.... ತಿಳಿ ಗಗನದ ಚಂದ್ರನ ಮೊಗದಂತೆ ಹೊಳೆಯುತಿದ್ದೆ. ಎಲ್ಲಾ ಸಮಯದಿ ಚಂದಗೆ ನಗುತಿದ್ದಿ, ಈಗಲೂ ಕೂಡ.
ಎ ಭೂಲೋಕದಲ್ಲಿ ಇದುವರೆಗೆ ನಂಗೆ ಯಾರು ಇಷ್ಟವಾಗಿರಲಿಲ್ಲ,ಆಗ ನಿನ್ನ ಒಳ್ಳೆಯ ಮನಸ್ಸು ಇಷ್ಟವಾಯ್ತು ಅಂದೆ, ನನಗೂ ಕೂಡ ನಿನ್ನ ಮುದ್ದು ಮುಖ, ಕೋಮಲ ಕೂದಲು, ಸುಂದರ ನಗು ಇಷ್ಟವಾಯ್ತು. ಅಂದಿನಿಂದ ನಾನು ಬದಲಾದೆ. ಅಂದೇ ಆಕಾಶದೀವಿಯ ಕೊನೆಯ ನಕ್ಷತ್ರಕ್ಕೆ ರಾಣಿ ಎಂದು ಹೆಸರಿಟ್ಟೆ. ಜೀವ ಬದುಕಿದರೆ ನಿನಗಾಗಿ! ಅಂಗೈಯಲ್ಲಿ ಕರ್ಪೂರ ಹಚ್ಚಿಕೊಂಡು ಬದುಕಿನ ಕತ್ತಲು ಕಳೆಯುವವಳಿಗಾಗಿ ಬೆಳಕಾಗಬೇಕೆಂದು ನಿರ್ಧರಿಸಿದೆ. ಅವಳಿಗಾಗಿ ನಮ್ಮೂರ ದೇವತೆಗೆ ಉರುಳುಸೇವೆಯ ಅರಕೆಯನ್ನು ಹೊತ್ತು, ತೀರಿಸಿಯು ಬಿಟ್ಟೆ :).

ಕನಸು ಕಾಣುವುದು ಅತಿಯಾದಾಗ ಏಣಿ ಆಕಾಶಕ್ಕೆ ಹಾಕಿದರೂ ಬುಡ ನೆಲದ ಮೇಲಿರಲಿ ಎಂದು ನಾನೇ ಹೇಳಿಕೊಂಡೆ. ಪ್ರತಿ ದಿನ ನಿನ್ನ ನೋಡುವ, ಮಾತನಾಡುವ ಬಯಕೆಗಳು ಹೆಚ್ಚಾದವು. ಇಬ್ಬರು ಸ್ಪರ್ಧೆಗಿಳಿದಂತೆ ಒಬ್ಬರಿಗಿಂತ ಒಬ್ಬರು ಜಾಸ್ತಿ ಪ್ರೀತಿಸಿದೆವು. ಎದುರು ಬಂದರೆ ಭಯ, ಅಂಜಿಕೆ, ನಾಚಿಕೆ, ಕಣ್ಣುಗಳು ಮಾತ್ರ ಮಾತನಾಡಿದವು. ನಿನ್ನ ಜೊತೆ ಮಾತನಾಡ ಬೇಕೆಂದಾಗ, ಆಕಾಶದಲ್ಲಿನ ಆಗಂತಕ ಶೂನ್ಯದ ಬಯಲ ತುದಿಯ ಮೌನ ನಿಲ್ದಾಣದಲ್ಲಿ ನಿಂತಿರುತಿದ್ದೆ, ನಾನು ಎಣಿಸಿ ಏಳು ಹೆಜ್ಜೆಗಳಲ್ಲಿ ಆ ಸಮುದ್ರ ದಾಟಿ ಬಂದು ಬಿಡುತಿದ್ದೆ. ಇನ್ನು ಮೌನದ ಸಂಬಾಷಣೆ. ನೀನು ಹೊರಡುವೆನೆಂದಾಗ ನಾನು ಹೋಗುವಿಯಂತೆ ಅವಸರವೇತಕೆ ಕೊಂಚ ಮಾತನಾಡುವುದಿದೆ ಎಂದು ಕಣ್ ಚುಂಬಿಸಿದ ಗಳಿಗೆಯ ಸಾವಿಗೆ ಸಾಟಿಯೇ ಇಲ್ಲ.

ಊರಿಲ್ಲದ, ಮನೆ ಮಠವಿಲ್ಲದ ಕನಸು ಕಟ್ಟುವ ಜೋಗಿ ಜಂಗಮನಂತೆ ತ್ರಿವೇಣಿ ರಾತ್ರಿ ಬವಣೆಗಳು ಕಡಿವಾದವು. ಅರ್ಧರಾತ್ರಿಯಲ್ಲಿ ನೀನು ಕನವರಿಸಿದರೆ ಜೀವದ ತನಕ ನನ್ನ ಲಾಲಿಹಾಡು ಯಾವುದೇ ಜಾವದಲ್ಲಿ ನಾನು ನೀನಗಿತಿದ್ದೆ. 'ಮೊದಲ ಮಳೆಗೆ ಪುಳಕಗೊಂಡ ಮಗುವಿನ ಹಾಗೆ', 'ನನ್ನ ಕನಸಿನ ಮೌನದಲ್ಲಿ ಬಂದು ತಾಕಿದ ದನಿಯ ಹಾಗೆ', ನೀನು ನಿತ್ಯ ದೀಪಾವಳಿಯ ಆಕಾಶಬುಟ್ಟಿ ಎದುರು ಬಂದಾಗ ಕಣ್ಣ ನೋಟದಲ್ಲೇ ಎದೆಯ ಬಾಗಿಲಿಗೆ ಬೆಂಕಿ ಇಟ್ಟು ನಾಲ್ಕು ಜನರ ಮಧ್ಯೆ ಕಾಡಿ ನನ್ನ ಪ್ರಾಣ ಬೇಕಾದರೂ ಕೊಡ್ತಿನಿ ಎಂದು ಹೇಳಿದ್ದಂತು ಮರೆಯಲು ಸಾಧ್ಯನಾ? ಈ ದಿನಗಳು ಹೇಗಿದ್ದೆವು, ನೋಡಿಯೂ ನೋಡದ ಹಾಗೆ, ಮುಟ್ಟಬೇಡ ದೂರ ಎಂದು ನೀನು ಹೇಳಿದ ಕ್ಷಣಗಳು ಅವಕಾಶ ಕೊಡದ ಹಾಗೆ ಹೇಗಿದ್ದವು, ಆದರೆ ನನಗೆ ನೆನಪಿದೆ ಅಂದು ಶುಕ್ರವಾರ ಮುಸ್ಸಂಜೆ ವೇಳೆ ಮಗುವಂತೆ ನಾನು ನಿನ್ನ ಮಡಿಲಲ್ಲಿ ಮಲಗಿದ್ದೆ ನೀನು ನನಗೆ ಗೊತ್ತೇ ಆಗದಂತೆ, ನಿನಗೂ ಗೊತ್ತಿಲ್ಲದೆ ಅಡ್ಡ ಹಿಡಿದು ತುಟಿಗೊಂದು, ಕೆನ್ನೆಗೆರಡು, ಹಣೆಗೆ ಮೂರು ಅಂತ ಮುತ್ತು ಕೊಟ್ಯಲ್ಲ ಅಮ್ಮಣ್ಣಿ, ಮತ್ತೆ ನಾನದನ್ನು ತಿರುಗಿಸಲು ಮುಂದಾದಾಗ ತಡೆದ ಗಳಿಗೆ. ಆ ದಿನ ನನಗೆ ಊಟ ಇಲ್ಲ, ನಿದ್ರೆ ಇಲ್ಲ, ಕನಸು ಬರಲಿಲ್ಲ, ನೀನು ಕೈ ಹಿಡಿದಿದ್ದು, ಮುತ್ತಿಟ್ಟು ಮನದಲ್ಲೇ ಮಾತನಾಡಿದ್ದು ಎಲ್ಲವೂ ನೆನಪಾಗುತ್ತಿತ್ತು. ಆದರೆ ದೇವರು ಏನೆಂದು ಕೊಳ್ಳುತ್ತಾನೋ ಎಂದು ನೀನು ಸುಮ್ಮನಾದೆ ನಾನು ಮೊದಲಿನಂತೆಯೇ ಉಳಿದೆ.
ನಾವಿಬ್ಬರೂ ಕೂತು ಹಂಚಿದ ಮಾತುಗಳು ಸಾವಿರ, ನಾವಿಬ್ಬರೂ ನಕ್ಕ ನಗೆಗಳ ಲೆಕ್ಕ ಗೊತ್ತಿಲ್ಲ, ನಗುವಿನಂಗಡಿಯಲ್ಲೂ ಇಲ್ಲವಂತೆ, ಆದರೆ ನನ್ನನ್ನು ಕಂಡಾಗ ನನ್ನನ್ನು ಕಂಡಾಗ ನಿನ್ನ ಕಣ್ತುಂಬಿ ಬರುವ ಉಪ್ಪು ನೀರು ಮಾತ್ರ ನನ್ನ ನೆನಪಿನಲ್ಲಿದೆ. ನನಗೆ ಅರಿವಿಲ್ಲದೆ ಮಾಡಿದ ಪ್ರೀತಿಯ ತಪ್ಪಲ್ಲಿ ಮತ್ತೊಂದು ಹಕ್ಕಿಯ ಉಸಿರು ಸೇರಿದೆ ಎಂದು ಮುಚ್ಚಿಟ್ಟಿದ್ದ ಕನಸುಗಳನ್ನ ಬಿಚ್ಚದೆ ತರುತಿದ್ದೆ. ಪೆದ್ದು ಎಂದು ನೀನು ನೀನು ಹೇಳಿದ ಮಾತುಗಳು ಕೊನೆಗೂ ನನ್ನ ಪೆದ್ದನಾಗಿಸಿವೆ. ಸಹಾಯ ಹಸ್ತ ನೀಡುವೆನೆಂದು ಕೈ ಮುಂದಿಟ್ಟಾಗ ಬೆರಳು ತಗುಲಿದ ಹೆಣ್ಣೊಂದು ಬಂದು ಪ್ರೀತಿಯ ಬೇಡ್ತಿದೆ. ಆದರೆ, ನನ್ನ ಮನಸು ಅವಳ ಕಷ್ಟಗಳ ನೋಡ್ತಿದೆ ಹೊರತು ಪ್ರೀತಿಯ ಬಯಕೆಯಲ್ಲ ಗೆಳತಿ. ತಪ್ಪಾಗಿ ತಿಳಿದು ದೂರ ಹೋಗ್ತಿದ್ದಿಯ, ನಿನ್ನ ದಾರಿ ಸುಖವಾಗಿರಲಿ, ಆ ನಿನ್ನ ಬಾಳಲ್ಲಿ ನಾನು ಎಂದೆಂದೂ ಬೆಳಕಾಗಿರುತ್ತೇನೆ. ಇನ್ನೂ ಎಷ್ಟುದಿನ ಹೇಗೆ ಕಾಯುವುದು?... ಸತ್ತು ಹೋಗೋವರೆಗೂ ಹೀಗೆ ಕಾಯ್ತಾನೆ ಇರ್ತೀನಿ ಅಂತ ಹೇಳಲಾರೆ, ನನ್ನ ಅರ್ಥ ಮಾಡ್ಕೋತಿಯ ಅಂತ ಕಾಯ್ತಾನೇ ಯಾವತ್ತೋ ಒಂದು ದಿನ ಸತ್ತು ಹೋಗ್ತೀನಿ ಅಂತ ಮಾತ್ರ ಹೇಳಬಲ್ಲೆ. ನಾನಿಲ್ಲಿ ದುಹಖದಲ್ಲಿದ್ದೆನೆಂದು ತಿಳಿಯಬೇಡ, ಇಲ್ಲಿ ನನಗೆ ಸಂತೋಷವಿಲ್ಲ ಅಷ್ಟೆ. ನೀನಿಲ್ಲದೆ ನನ್ನ ಎಲ್ಲವೂ ನಶ್ವರ, ನಿನ್ನನ್ನ ನೋಡುವ ಆಸೆಯಾಗಿದೆ, ಹಸಿರು ಸೀರೆ ಉಟ್ಟು ರಾತ್ರಿ ಕನಸಿಗೆ ಬರ್ತಿಯಾ? ಒಬ್ಬಟ್ಟನ್ನು ಮರೆಯದೆ ತರ್ತಿಯಾ? ನೀನು ಸೀರೆ ಹಾಕೊಂಡು ಬಂದಂದೆ ನನಗೆ ಹಬ್ಬ....

ಮಾತಲ್ಲಿ ಹೇಳಲಾಗದೆ... ಅಕ್ಷರಗಳಾಗಿ ನಿನ್ನ ಮುಂದೆ ಇರಿಸಿದ್ದೇನೆ ಓದಿದಮೇಲೆ ನನ್ನಕಡೆ ತಿರುಗ್ತಿಯ ಅಲ್ವ?


- ಕೆ ಎಸ್ ರಾಜು

Wednesday, July 23, 2008

ಆ ನಿನ್ನ ನೆನಪು

ಮೊದ ಮೊದಲು ನಿನ್ನೊಡನಿಟ್ಟ ಹೆಜ್ಜೆಯ ತಲ್ಲಣದಿ
ನಾಚಿ ನದಿ ಸೇರಿದೆ ಈ ಭೂಮಿಯ ಕಂಪನ
ನಾಡಿಯ ನೆತ್ತರು ನಿಂತಂತಾಗಿ ಒಂದು ಕ್ಷಣ
ಪ್ರತಿ ಗಳಿಗೆಯೂ ಮಾಡಿದೆ ಆ ದಿನಗಳ ಗುಣಗಾನ ||

ನೀ ನುಡಿದ ಪ್ರೆಮಸ್ವರ, 'ನಿನ್ನವಳೇ ನಾನೆಂದೂ..,ಎಂದೆದೂ'!
ಕಾಲಚಕ್ರ ಉರುಳಿದಂತೆ ನಿನಗೀಗ ನೆನಪಾಗದೇ? ಅಂದಿನ ರಾಗ
ಇದು ಮೋಕ್ಷವೋ?... ಮುಕ್ತಿಯೋ?...ತಿಳಿಯದೆ ಸತ್ತಿದೆ ನನ್ನುಸಿರು
ಬಾಡಿದ ಮನಸು ಕಾದಿದೆ ಹಸಿಯಾಗುವುದೆಂದು ಉಸಿರು||

ವಜ್ರ ಒಡವೆಯ ಹರಳಿನಂತೆ ಕೂಡಿಟ್ಟ ಕನಸುಗಳು
ಮುಂಜಾನೆಯ ರವಿ ನೋಡದ ಕಮಲವೊಂದರ ಮೊಗದಂತಾಯಿತೆ
ತೃಣ ಸ್ಪರ್ಶ ದೊರೆಯದ ಮಂಜಿನ ಹನಿಯ ನೋವಲ್ಲಿ ಸೇರಿ
ಉಸಿರುಳಿಸಿದೆ ಕೊನಿಗೂ ಆ ನಿನ್ನ ನೆನಪು ... ಆ ನಿನ್ನ ನೆನಪು||


- ಕೆ ಎಸ್ ರಾಜು

Friday, July 4, 2008

ಪ್ರೀತಿಯ ಮುನಿಸು

ಹೋಗುವೆಯಾ? ಉಸಿರೇ, ಹೃದಯವ ತೊರೆದು
ಹೋದಮೇಲೂ ಪ್ರೀತಿಸುವೆಯ, ಈ ಬಡ ದೇಹವ ||

ನೀನಿಲ್ಲದ ಬಾಳು, ನೆನಪಿನ ನೋವುಗಳ ಸುಡುಗಾಡು
ಎದೆ ಹತ್ತಿ ಉರಿದು ಬೂದಿಯಾಗಲೊಲ್ಲದು
ಹೋಗುವೆಯಾ? ಉಸಿರೇ, ಹೃದಯವ ತೊರೆದು ||

ಮಾಡದ ತಪ್ಪಿಗೆ ಕ್ಷಮಾಯಾಚನೆ ಬೇಕೆ
ಸ್ವಾಭಿಮಾನವ ಬಿಟ್ಟು ಬದುಕುವುದೇಕೆ
ಹೋದರೆ ಹೋಗಿಬಿಡು, ನಿನಗೀಗ ತಿಳಿಯದು ಸತ್ಯ
ಅರಿವಾದ ಗಳಿಗೆಯೇ ಬಂದೇ ಬರುವೆ ಈ ಮುದ್ದು ಮನಸಿನ ಹತ್ರ ||

ಮಾತಲಿ ಕಟ್ಟಿದ ಗೂಡಿನ ಒಳಗೆ
ಬೆಚ್ಚಗೆ ಇಟ್ಟೆ ನಿನ್ನನ್ನು
ಸಣ್ಣಗೆ ಬಂದ ಬಿರುಗಾಳಿಗೆ ಹೆದುರಿ
ತೊರೆದೆಯ ಈ ಪುಟ್ಟ ಹೃದಯವನು ||

- ಕೆ ಎಸ್ ರಾಜು.

Tuesday, June 24, 2008

ಪ್ರೀತಿ ಎಷ್ಟು ಮಧುರ

ರವಿಯಾಗಿ ನಿನ್ನ ಬಾಳ ಬೆಳಗಲೆಂದು ಬಂದೆ
ತಂಗಾಳಿಯಾಗಿ ನೀ ನನ್ನ ಚಂದಿರನಾಗಿಸಿದೆ
ಕಲ್ಲು ಬಂಡೆಯಾಗಿ ಕರಗದೇ ಕುಳಿತಿದ್ದೆ
ಚೆಲುವೆ ಅಲೆಯಾಗಿ ನೀ ಬಂದು ಮುದ್ದಿಸಿದೆ
ನಿನ್ನ ಪ್ರೀತಿ ಎಷ್ಟು ಮಧುರ... ಪ್ರೀತಿ ಎಷ್ಟು ಮಧುರ ||

ಹೆತ್ತವಳ ಮಡಿಲಲ್ಲಿ ನಾನುಂಡ ಪ್ರೀತಿಯ
ಮರೆಮಾಡಿದೆ ನಿನ್ನ ಕಂಗಳ ಒಲವಿನ ಆಸರೆ
ಮೂಸಿಕನ ಮಾತಿಗೆ ಗಡಗಡ ಎನ್ನುವವ ನಾನು
ನನ್ನೀ ಜೀವವ ಅರ್ಪಿಸಿರುವೆ ಉಸಿರೇ
ನಿನ್ನ ಪ್ರೀತಿ ಎಷ್ಟು ಮಧುರ... ಪ್ರೀತಿ ಎಷ್ಟು ಮಧುರ ||


- ಕೆ ಎಸ್ ರಾಜು

Wednesday, June 4, 2008

ನಾ ಬರೆದೆ ನಿನಗಾಗಿ

ತಿಳಿಗಾಳಿಗೆ ತಂಪಾದ ಬೆಳ್ಳಿ ಮೋಡದಂತ್ತಿದ್ದೆ
ಇಂದೇಕೋ ಮಿಂಚಂತೆ ನೀ ಬಂದೆ
ಈ ಹುಚ್ಚು ಕಂಗಳ ಒಳಗೆ ಮೊದಲೇ ಬಿದ್ದೆ
ಹಸಿಯಾಗಿ ಈ ಮಯ್ಯ ನೀ ತೋಯ್ದೆ||

ಮೊಗವೆಲ್ಲ ಎಳೆ ಹುವ್ವಾಗಿ
ಮಯ್ಯೆಲ್ಲ ಗುಲಾಬಿ ರಂಗಾಗಿ
ನನ್ಮುಂದೆ ನಾಚುತ ನಿಂತಾಗ ನೀನಾಗಿ
ಎದೆ ಝಲ್ ಝಲ್ ಎಂದು ಗಡುಸಾಗಿ ಬೀರಿದೆ ಮುದ್ದಿಸು ಒಮ್ಮೆ||

ನಿನ್ನ ಮೊಗದಲ್ಲಿದ್ದ ಆ ಕೂಸ್ ತನ
ಕಂಗಳ ಅಂಚಲಿದ್ದ ಪ್ರೀತಿಯ ಆಲಿಂಗನ
ತುಟಿ ತೆರೆದಾಗ ನೀ ನುಡಿದ ಪ್ರೇಮಗಾನ
ಜಾಸ್ತಿ ಮಾಡಿದೆ ಇಂದು ನನ್ನ ಹುಚ್ಚುತನ ||


- ಕೆ ಎಸ್ ರಾಜು

Monday, June 2, 2008

ಪ್ರೇಮಿಗಳಿಗೆ ಪಿಸುಮಾತು

ಝುಳು ಝುಳು ಹರಿಯುವ ನೀರಿನ ಮೇಲಿನ ಗುಳ್ಳೆ
ಸೇರಿದೆ ಈ ಮನುಕುಲದ ಉಸಿರಿನಲಿ
ಪ್ರೀತಿ ಅಂತ ನುಡಿದ ಮಾತ್ರಕೆ, ಅವಳು ನಿನ್ನವಳಾಗಳು ಮಂಕೆ
ಎದೆಯಲ್ಲಿ ಇಟ್ಟು ಪೂಜಿಸು ಅವಳ, ನೀನಾಗುವೆ ಪ್ರೇಮಿ ||

ಎಷ್ಟು ಉಂಡರು ಸಾಲದು ಪ್ರೀತಿ
ಸವಿಸವಿಯುತ ರಸಬೀರುವ ನಿನ್ನೀ ಹೃದಯ
ಸತ್ತರೂ ಮುಗಿಯದ ನೀ ಕೊಟ್ಟ ಕನಸುಗಳು
ಪ್ರೀತಿಸುವೆ ನಾ ನಿನ್ನ ಮನಸಾರೆ, ಬಾ ನನ್ನ ಅಪ್ಪಿಕೊ ||

ಇದು ನಿಜ ಪ್ರೀತಿ, ಅದೇ ನನ್ನ ರೀತಿ
ನನ್ನೀ ಜೀವನ ಕತ್ತಲೆಯಲ್ಲಿ ಮುಳುಗಿದೆ ಗೆಳತಿ
ಬೆಳಕಾಗುವೆಯ ಈ ಬದುಕಲ್ಲಿ
ಕೈ ಹಿಡಿದು ನಡೆಸು ನನ್ನ, ಕೈ ಹಿಡಿದು ನಡೆಸು ನನ್ನ ||

-ಕೆ ಎಸ್ ರಾಜು

Wednesday, April 9, 2008

ಇದು ಪ್ರೀತಿನಾ... !!!

ಮನದ ಮುಗಿಲ ಮುಟ್ಟಿದ ತಂಗಾಳಿ
ಇಂದೇಕೋ ಬೀಸಿದೆ ನನ್ನೆದೆಯಲ್ಲಿ ಬಿರುಗಾಳಿ
ಕೈಗೆ ಎಟುಕದ ಸಿಹಿಗಾಳಿ,ತೂರಿದೆ ನನ್ನೆದೆಯಲಿ ಚಳಿಯಾಗಿ
ಇದು ಪ್ರೀತಿನಾ...! ಪ್ರೀತಿನಾ...!

ಗೆಳತಿಯ ಬರುವಿಕೆಗಾಗಿ ಕಾದ ಆ ಗಳಿಗೆ
ಬಂದಾಕ್ಷಣ ಕಣ್ತುಂಬಿ ಸಂತೈಸುವಳೆಂಬ ಬಯಕೆ
ನನ್ನ ಕಾಡಿ ಕಾಡಿ ಒರಗಿಸಿದೆ ಅವಳೆದೆಗೆ
ಇದು ಪ್ರೀತಿನಾ...! ಪ್ರೀತಿನಾ...!

ನನ್ನೆದುರು ಬಂದಾಗ, ಈ ಮನವೆಕೋ ತಿಳಿಯಾಗಿ
ಅವಳ ಬಾಡಿದ ಮೊಗನೋಡಿ, ನನ್ನುಸಿರು ಬಿಗಿಯಾಗಿ
ನನ್ನವಳ ಬಾಹು ಬಂದಿತನಾಗುವ ಆಸೆ!... ಹುಚ್ಚಾಗಿದೆ
ಇದು ಪ್ರೀತಿನಾ...! ಪ್ರೀತಿನಾ...!

ಕೇಳಲೇಬೇಕಿದೆ ಇಂದು ನಾ!

- ಕೆ ಎಸ್ ರಾಜು

Tuesday, April 1, 2008

ಮನಸಿನ ಒಳಗೆ ಸೇರ್ಕೊಂಡ್ರೆ

ಗೆಳೆಯನೊಬ್ಬನ ಮುದ್ದಿನ ಸ್ನೇಹ

ಸೇರ್ಕೊಂಡಿತ್ತು ನನ್ನಯ ಮನಸ್ಸು

ಬದುಕಿನ ಆಟಕೆ ಕ್ಷಣಗಣನೆ

ತಿನ್ನೋ ಅನ್ನಕ್ಕೆ, ಬದುಕಿನ ಜಂಜಾಟಕೆ

ಬವಣೆಯ ಭಾವನೆ ತಿಳಿದು

ದೂರ ಸರಿದ ಗೆಳೆಯನ ನೆನಪುಗಳು ಸೇರ್ಕೊಂಡಿದೆ ನನ್ನ ಮನ

ಕೂಡಿ ಕಳೆದ ಗಳಿಗೆಗಳೆಲ್ಲ

ಕುಂತರು ನಿಂತರು ಅವನ ಮಾತಿನ ತುಂತುರು

ಕಷ್ಟ ಎಂದಾಗ ಅತನಿತ್ತ ಕಣ್ಣೀರಿನ ಬಿಂಬ

ತೋರಿಸ್ತಿದೆ ಸ್ನೇಹವೆಷ್ಟು ಮಧುರ ಹಾಗೆ ಅಮರ

ಸ್ನೇಹಕ್ಕೆ ಎಂದು ಕೊನೆ ಇಲ್ಲ, ನಮ್ಮೀ ಸ್ನೇಹ ನಿಲ್ಲೋದಿಲ್ಲ

ಖುಷಿಯಾಗಿರು ನೀನು ಎಲ್ಲೇ ಇದ್ರು,

ಕ್ಲಿಷ್ಟವಾದ ಈ ಸ್ನೇಹ ಕಷ್ಟ ಆಗುತ್ತೆ ಮರೆಯೋದು

ಒಮ್ಮೆ ಮನಸಿನ ಒಳಗೆ ಸೇರ್ಕೊಂಡ್ರೆ

- ಕೆ ಎಸ್ ರಾಜು

Monday, March 31, 2008

ಹೃದಯ ಮುರಿದ ಪ್ರೀತಿ

ಕವಚ ಕಟ್ಟಿದ ಎದೆಯನ್ನ
ನೆತ್ತರು ಸುತ್ತಿದ ಕೋಟೆಯನ್ನ
ಬರಿ ಮುಗುಳ್ನಗೆಯಲ್ಲೇ ಮುರಿದ ಮಲ್ಲಿಗೆ
ಪ್ರೀತಿಯ ತುಣುಕು ಬಲು ಕಠಿಣ
- ಕೆ ಎಸ್ ರಾಜು