ಕಳೆಯಲು ಬಯಸುತಿದೆ ಮನಸ್ಸು ನಿನ್ನ ಜೊತೆ
ಒಂದು ದಿವ್ಯ ಸಂಜೆ
ಆಕಾಶವು ತಿಳಿಯಾದಾಗ,
ಸಮುದ್ರ ಶಾಂತವಾದಾಗ
ಕನಸಿಗೆ ಚುಂಬಿಸಿದ ಪ್ರೀತಿಯ ಸಂಜೆ
ಮನಸಿನ ಮಾತು ಕೇಳದಾದಾಗ,
ಹೃದಯದ ಬಡಿತ ಜೋರಾದಾಗ
ತಂಗಾಳಿಯ ತೋಳಲಿ ಅಡಗಿದ ಸಂಜೆ
ನಿನ್ನೆದೆ ನೋವಿಗೆ ಸ್ಪಂಧಿಸಿದಾಗ,
ಈ ಮನಸಿನ ಕದವ ನೀ ತೆರೆದಾಗ
ಬೆಚ್ಚಗೆ ಇಡುವ ಮುತ್ತಿನ ಸಂಜೆ
ಕಣ್ಣೀರಲಿ ನಗುವ ನೀನಿಟ್ಟಾಗ,
ಮೌನವೇ ಮಾತು ಕಲಿತಾಗ
ಹರಳಿದ ಹೂವಿನ ಅದ್ಭುತ ಸಂಜೆ
-ಕೆ ಎಸ್ ರಾಜು
Tuesday, August 11, 2009
Sunday, August 2, 2009
ಸಾಕೆನಗೆ
ಅತ್ತಿಂದಿತ್ತ ಸಂಚರಿಸುತಿರಲು ಬೆಳ್ಳಿ ಮೋಡಗಳು
ತಂಗಾಳಿ ನಿನಗೇಕೆ ಚಂದಿರನ ಕಾವಲು
ಎಲ್ಲಿರುವಳೋ ನನ್ನಾಕೆಯ ನಾ ಹುಡುಕಲು
ಬೇಕಾಗಿದೆ ಹಾಲ್ಗೆನ್ನೆಯ ಬೆಳದಿಂಗಳು
ಅಡಗಿದೆ ನಿನ್ನೆದೆಯ ಹೆಸರಲಿ ಪವಿತ್ರತೆ
ಅದನಿಡಿದು ನಾ ಕುಳಿತೆ ಬರೆಯಲು ಸ್ನೇಹದ ಗೀತೆ
ನಿನ್ನೊಡಗಿನ ಸರಸ ಸಲ್ಲಾಪಗಳ ಈಗಲೇ ಅರಿತೆ
ಮನವರಿಯದೆ ನಿನ್ನ ಪ್ರೇಮದಾಟದಲಿ ನಾ ಸೋತೆ
ಅನಿಸು, ಮುನಿಸುಗಳ ನೀ ಹೇಳುತಲಿರಲು
ಮತ್ತೆ ಮತ್ತೆ ನಿನ್ನ ನಾ ನೋಯಿಸುತಲಿರಲು
ನೀನೊಂದು ಒಲವೋ, ವಿಷ್ಮಯವೋ ನಾ ಅರಿಯೇ
ಇಂದೇಕೋ ಮನ ಕುಣಿದಾಡುತಿದೆ ಅದು ಸಾಕೆನಗೆ,ಅದು ಸಾಕೆನಗೆ
-ಕೆ ಎಸ್ ರಾಜು
ತಂಗಾಳಿ ನಿನಗೇಕೆ ಚಂದಿರನ ಕಾವಲು
ಎಲ್ಲಿರುವಳೋ ನನ್ನಾಕೆಯ ನಾ ಹುಡುಕಲು
ಬೇಕಾಗಿದೆ ಹಾಲ್ಗೆನ್ನೆಯ ಬೆಳದಿಂಗಳು
ಅಡಗಿದೆ ನಿನ್ನೆದೆಯ ಹೆಸರಲಿ ಪವಿತ್ರತೆ
ಅದನಿಡಿದು ನಾ ಕುಳಿತೆ ಬರೆಯಲು ಸ್ನೇಹದ ಗೀತೆ
ನಿನ್ನೊಡಗಿನ ಸರಸ ಸಲ್ಲಾಪಗಳ ಈಗಲೇ ಅರಿತೆ
ಮನವರಿಯದೆ ನಿನ್ನ ಪ್ರೇಮದಾಟದಲಿ ನಾ ಸೋತೆ
ಅನಿಸು, ಮುನಿಸುಗಳ ನೀ ಹೇಳುತಲಿರಲು
ಮತ್ತೆ ಮತ್ತೆ ನಿನ್ನ ನಾ ನೋಯಿಸುತಲಿರಲು
ನೀನೊಂದು ಒಲವೋ, ವಿಷ್ಮಯವೋ ನಾ ಅರಿಯೇ
ಇಂದೇಕೋ ಮನ ಕುಣಿದಾಡುತಿದೆ ಅದು ಸಾಕೆನಗೆ,ಅದು ಸಾಕೆನಗೆ
-ಕೆ ಎಸ್ ರಾಜು
Subscribe to:
Posts (Atom)