Wednesday, June 4, 2008

ನಾ ಬರೆದೆ ನಿನಗಾಗಿ

ತಿಳಿಗಾಳಿಗೆ ತಂಪಾದ ಬೆಳ್ಳಿ ಮೋಡದಂತ್ತಿದ್ದೆ
ಇಂದೇಕೋ ಮಿಂಚಂತೆ ನೀ ಬಂದೆ
ಈ ಹುಚ್ಚು ಕಂಗಳ ಒಳಗೆ ಮೊದಲೇ ಬಿದ್ದೆ
ಹಸಿಯಾಗಿ ಈ ಮಯ್ಯ ನೀ ತೋಯ್ದೆ||

ಮೊಗವೆಲ್ಲ ಎಳೆ ಹುವ್ವಾಗಿ
ಮಯ್ಯೆಲ್ಲ ಗುಲಾಬಿ ರಂಗಾಗಿ
ನನ್ಮುಂದೆ ನಾಚುತ ನಿಂತಾಗ ನೀನಾಗಿ
ಎದೆ ಝಲ್ ಝಲ್ ಎಂದು ಗಡುಸಾಗಿ ಬೀರಿದೆ ಮುದ್ದಿಸು ಒಮ್ಮೆ||

ನಿನ್ನ ಮೊಗದಲ್ಲಿದ್ದ ಆ ಕೂಸ್ ತನ
ಕಂಗಳ ಅಂಚಲಿದ್ದ ಪ್ರೀತಿಯ ಆಲಿಂಗನ
ತುಟಿ ತೆರೆದಾಗ ನೀ ನುಡಿದ ಪ್ರೇಮಗಾನ
ಜಾಸ್ತಿ ಮಾಡಿದೆ ಇಂದು ನನ್ನ ಹುಚ್ಚುತನ ||


- ಕೆ ಎಸ್ ರಾಜು

2 comments:

ಅಂತರ್ವಾಣಿ said...

ಮತ್ತೊಂದು ಸುಂದರ ಕವನ.

ಕೊನೆ ಚರಣ ಅದ್ಭುತ!

Rashmi Prasad said...

Bahala saralawaada shabdagalinda tumba chennagi kavite rachisiddiri.