ಮನದ ಮುಗಿಲ ಮುಟ್ಟಿದ ತಂಗಾಳಿ
ಇಂದೇಕೋ ಬೀಸಿದೆ ನನ್ನೆದೆಯಲ್ಲಿ ಬಿರುಗಾಳಿ
ಕೈಗೆ ಎಟುಕದ ಸಿಹಿಗಾಳಿ,ತೂರಿದೆ ನನ್ನೆದೆಯಲಿ ಚಳಿಯಾಗಿ
ಇದು ಪ್ರೀತಿನಾ...! ಪ್ರೀತಿನಾ...!
ಗೆಳತಿಯ ಬರುವಿಕೆಗಾಗಿ ಕಾದ ಆ ಗಳಿಗೆ
ಬಂದಾಕ್ಷಣ ಕಣ್ತುಂಬಿ ಸಂತೈಸುವಳೆಂಬ ಬಯಕೆ
ನನ್ನ ಕಾಡಿ ಕಾಡಿ ಒರಗಿಸಿದೆ ಅವಳೆದೆಗೆ
ಇದು ಪ್ರೀತಿನಾ...! ಪ್ರೀತಿನಾ...!
ನನ್ನೆದುರು ಬಂದಾಗ, ಈ ಮನವೆಕೋ ತಿಳಿಯಾಗಿ
ಅವಳ ಬಾಡಿದ ಮೊಗನೋಡಿ, ನನ್ನುಸಿರು ಬಿಗಿಯಾಗಿ
ನನ್ನವಳ ಬಾಹು ಬಂದಿತನಾಗುವ ಆಸೆ!... ಹುಚ್ಚಾಗಿದೆ
ಇದು ಪ್ರೀತಿನಾ...! ಪ್ರೀತಿನಾ...!
ಕೇಳಲೇಬೇಕಿದೆ ಇಂದು ನಾ!
- ಕೆ ಎಸ್ ರಾಜು
Wednesday, April 9, 2008
Tuesday, April 1, 2008
ಮನಸಿನ ಒಳಗೆ ಸೇರ್ಕೊಂಡ್ರೆ
ಗೆಳೆಯನೊಬ್ಬನ ಮುದ್ದಿನ ಸ್ನೇಹ
ಸೇರ್ಕೊಂಡಿತ್ತು ನನ್ನಯ ಮನಸ್ಸು
ಬದುಕಿನ ಆಟಕೆ ಕ್ಷಣಗಣನೆ
ತಿನ್ನೋ ಅನ್ನಕ್ಕೆ, ಬದುಕಿನ ಜಂಜಾಟಕೆ
ಬವಣೆಯ ಭಾವನೆ ತಿಳಿದು
ದೂರ ಸರಿದ ಗೆಳೆಯನ ನೆನಪುಗಳು ಸೇರ್ಕೊಂಡಿದೆ ನನ್ನ ಮನ
ಕೂಡಿ ಕಳೆದ ಗಳಿಗೆಗಳೆಲ್ಲ
ಕುಂತರು ನಿಂತರು ಅವನ ಮಾತಿನ ತುಂತುರು
ಕಷ್ಟ ಎಂದಾಗ ಅತನಿತ್ತ ಕಣ್ಣೀರಿನ ಬಿಂಬ
ತೋರಿಸ್ತಿದೆ ಸ್ನೇಹವೆಷ್ಟು ಮಧುರ ಹಾಗೆ ಅಮರ
ಸ್ನೇಹಕ್ಕೆ ಎಂದು ಕೊನೆ ಇಲ್ಲ, ನಮ್ಮೀ ಸ್ನೇಹ ನಿಲ್ಲೋದಿಲ್ಲ
ಖುಷಿಯಾಗಿರು ನೀನು ಎಲ್ಲೇ ಇದ್ರು,
ಕ್ಲಿಷ್ಟವಾದ ಈ ಸ್ನೇಹ ಕಷ್ಟ ಆಗುತ್ತೆ ಮರೆಯೋದು
ಒಮ್ಮೆ ಮನಸಿನ ಒಳಗೆ ಸೇರ್ಕೊಂಡ್ರೆ
- ಕೆ ಎಸ್ ರಾಜು
Subscribe to:
Posts (Atom)