ಅತ್ತಿಂದಿತ್ತ ಸಂಚರಿಸುತಿರಲು ಬೆಳ್ಳಿ ಮೋಡಗಳು
ತಂಗಾಳಿ ನಿನಗೇಕೆ ಚಂದಿರನ ಕಾವಲು
ಎಲ್ಲಿರುವಳೋ ನನ್ನಾಕೆಯ ನಾ ಹುಡುಕಲು
ಬೇಕಾಗಿದೆ ಹಾಲ್ಗೆನ್ನೆಯ ಬೆಳದಿಂಗಳು
ಅಡಗಿದೆ ನಿನ್ನೆದೆಯ ಹೆಸರಲಿ ಪವಿತ್ರತೆ
ಅದನಿಡಿದು ನಾ ಕುಳಿತೆ ಬರೆಯಲು ಸ್ನೇಹದ ಗೀತೆ
ನಿನ್ನೊಡಗಿನ ಸರಸ ಸಲ್ಲಾಪಗಳ ಈಗಲೇ ಅರಿತೆ
ಮನವರಿಯದೆ ನಿನ್ನ ಪ್ರೇಮದಾಟದಲಿ ನಾ ಸೋತೆ
ಅನಿಸು, ಮುನಿಸುಗಳ ನೀ ಹೇಳುತಲಿರಲು
ಮತ್ತೆ ಮತ್ತೆ ನಿನ್ನ ನಾ ನೋಯಿಸುತಲಿರಲು
ನೀನೊಂದು ಒಲವೋ, ವಿಷ್ಮಯವೋ ನಾ ಅರಿಯೇ
ಇಂದೇಕೋ ಮನ ಕುಣಿದಾಡುತಿದೆ ಅದು ಸಾಕೆನಗೆ,ಅದು ಸಾಕೆನಗೆ
-ಕೆ ಎಸ್ ರಾಜು
Sunday, August 2, 2009
Subscribe to:
Post Comments (Atom)
No comments:
Post a Comment