ಕಳೆಯಲು ಬಯಸುತಿದೆ ಮನಸ್ಸು ನಿನ್ನ ಜೊತೆ
ಒಂದು ದಿವ್ಯ ಸಂಜೆ
ಆಕಾಶವು ತಿಳಿಯಾದಾಗ,
ಸಮುದ್ರ ಶಾಂತವಾದಾಗ
ಕನಸಿಗೆ ಚುಂಬಿಸಿದ ಪ್ರೀತಿಯ ಸಂಜೆ
ಮನಸಿನ ಮಾತು ಕೇಳದಾದಾಗ,
ಹೃದಯದ ಬಡಿತ ಜೋರಾದಾಗ
ತಂಗಾಳಿಯ ತೋಳಲಿ ಅಡಗಿದ ಸಂಜೆ
ನಿನ್ನೆದೆ ನೋವಿಗೆ ಸ್ಪಂಧಿಸಿದಾಗ,
ಈ ಮನಸಿನ ಕದವ ನೀ ತೆರೆದಾಗ
ಬೆಚ್ಚಗೆ ಇಡುವ ಮುತ್ತಿನ ಸಂಜೆ
ಕಣ್ಣೀರಲಿ ನಗುವ ನೀನಿಟ್ಟಾಗ,
ಮೌನವೇ ಮಾತು ಕಲಿತಾಗ
ಹರಳಿದ ಹೂವಿನ ಅದ್ಭುತ ಸಂಜೆ
-ಕೆ ಎಸ್ ರಾಜು
Tuesday, August 11, 2009
Subscribe to:
Post Comments (Atom)
2 comments:
ಬೇಸರದಿಂದ ನಾ ಬಂದಾಗ
ನಿನ್ನ ಕವನ ಓದಿದಾಗ
ಮನಸ್ಸಿಗೆ ಹಿತ ನೀಡಿತು ಈ ಸಂಜೆ..
Superb dear...
Post a Comment